Wednesday, October 12, 2022

 

ವಚನಗಳು

ಅಲ್ಲಮಪ್ರಭು ವಚನಗಳು

 ಅಂಗ ಅಂಗನೆಯ ರೂಪಲ್ಲದೆ,
ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು.
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ !
ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ

ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
ಜ್ಞಾನನಷ್ಟ ಶಬ್ದ ನೋಡಾ. ಳ
ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
ಬಿನ್ನವಿಲ್ಲ ನೋಡಾ- ಗುಹೇಶ್ವರ ಸಾಕ್ಷಿಯಾಗಿ


 

ಅಂಗ ಉಳ್ಳನ್ನಬರ ಲಿಂಗಪೂಜೆಯ ಬೇಕು.
ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು.
ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು.
ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ.

ಅಂಗ ಮೂವತ್ತಾರರ ಮೇಲೆ ಲಿಂಗ.
ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ,
ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ
ಸುಸಂಗ ಪ್ರಸಾದವ ಕೊಳಬಲ್ಲವಂಗೆ
ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು

ಅಂಗ ಲಿಂಗದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.

ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ
ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು.
ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ?
ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ.
ಗುಹೇಶ್ವರಲಿಂಗ ಸಾಕ್ಷಿಯಾಗಿ,
ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ.

ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು.
ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು.
ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ
ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ,
ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ
ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
ಲಿಂಗದ ಹವಣನಿವರೆತ್ತ ಬಲ್ಲರು ?
ಕಾಯಜೀವಿಗಳು ಕಳವಳಧಾರಿಗಳು,
ದೇವರ ಸುದ್ದಿಯನಿವರೆತ್ತ ಬಲ್ಲರು ?
ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು.
ಗುಹೇಶ್ವರನ ನಿಲವನಿವರೆತ್ತ ಬಲ್ಲರು.

ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
ಮನಬಂದ ಪರಿಯಲ್ಲಿ ನುಡಿವಿರಿ,
ಗುಹೇಶ್ವರಲಿಂಗ ನಿಮಗೆಲ್ಲಿಯದೊ ?

ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
ಶಬ್ದಸಂದಣಿಗೆ ಹಂಗಿಲ್ಲ ನೋಡಾ.
ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.

 ಬಸವಣ್ಣನ ವಚನಗಳು

ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
ವೇದವನೋದಿದ ಬ್ರಹ್ಮನ ಶಿರಹೋಯ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ?
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ!
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ!

ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎ ನ್ನ ನರಗಳ ತಂತಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಉರದಲೊತ್ತಿ ಬಾರಿಸು ಕೂಡಲಸಂಗಮದೇವ!

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ

ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

ಕೂಡಲ ಸಂಗಮ ದೆವಾ
ನಿಮ್ಮ ಚರಣಕಮಲದೊಳಗಾನು ತುಂಬಿ

ನೀರಿಗೆ ನೈದಿಲೆ ಶೃಂಗಾರ
ಸಮುದ್ರಕೆ ತೆರೆಯೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ

ಗಗನಕೆ ಚಂದ್ರಮ ಶೃಂಗಾರ
ನಮ್ಮ ಕೂಡಲ ಸಂಗನ ಶರಣರ
ನೊಸಲಿಗೆ ವಿಭೂತಿಯೆ ಶೃಂಗಾರ

ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ.
ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ.
ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದು ಎನಿಸಯ್ಯ.

 ಸರ್ವಜ್ಙ ನ ವಚನಗಳು

ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |
ಕೇಶವನು ಭಕ್ತರೊಳಗೆಲ್ಲ ಮೂರು ಕ |
ಣ್ಣೀಶನೇ ದೈವ ಸರ್ವಜ್ಞ

ಉಂಬಳಿಯ ಇದ್ದವನು | ಕಂಬಳಿಯ ಹೊದೆಯುವನೇ ? |
ಶಂಭುವಿರಲ್ಲಿಕ್ಕೆ ಮತ್ತೊಂದು ದೈವವ |
ನಂಬುವನೇ ಹೆಡ್ಡ ಸರ್ವಜ್ಞ

ಅಂಜದಲೆ ಕೊಂಡಿಹರೆ | ನಂಬು ಅಮೃತದಕ್ಕು |
ಅಂಜೆ ಅಳುಕುತಲಿ ಕೊಂಡಿಹರೆ, ಅಮೃತವು |
ನಂಜಿನಂತಕ್ಕು ಸರ್ವಜ್ಞ

ಎಂಜಲೂ ಅಶೌಚ |
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ |
ರಂಜನನ ನೆನಯೂ ಸರ್ವಜ್ಞ

ಅಕ್ಕಮಹಾದೇವಿ ವಚನಗಳು

ಅಂಗವಿಕಾರಸಂಗವ ಮರೆದು, ಲಿಂಗವನೊಡಗೂಡುತಿಪ್ಪವರ ತೋರಾ ಎನಗೆ. ಕಾಮವಿಕಾರಕತ್ತಲೆಯಳಿದು, ಭಕ್ತಿಪ್ರಾಣವಾಗಿಪ್ಪವರ ತೋರಾ ಎನಗೆ. ತ್ರಿಕರಣ ಶುದ್ಧವಾಗಿ ನಿಮ್ಮ ನೆರೆ ನಂಬಿದ ಸದ್ಭಕ್ತರ ತೋರಾ ಎನಗೆ ಚೆನ್ನಮಲ್ಲಿಕಾರ್ಜುನಾ.

ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ ಅರಿಯೆನಯ್ಯಾ.

ಅಂಗೈಯೊಳಗಣ ಲಿಂಗವ ಪೂಜಿಸುತ್ತ, ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ. ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ.

ಅಂದೂ ನೀನೆ, ಇಂದೂ ನೀನೆ, ಏಂದೂ ನೀನೆ, ಕೇಳಾ ತಂದೆ. ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ. ಒಂದಲ್ಲದೆ ಎರಡಯೆನಯ್ಯಾ. ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.

ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.

 

VEGETABLE NAMES IN KANNADA 

Jump to navigationJump to search
EnglishKannada TransliterationKannada
VegetableTarakariತರಕಾರಿ
Beans /Green BeansHurali kaayiಹುರಳೀಕಾಯಿ
Bitter gourdHaagala kaayiಹಾಗಲಕಾಯಿ
Bottle gourdSore kaayeಸೋರೆಕಾಯಿ
BrinjalBadane kaayiಬದನೇಕಾಯಿ
CabbageYele kosuಎಲೆ ಕೋಸು
CapsicumDonne Menasina kaayi / Dappa Menasina kaayiದೊಣ್ಣೆ ಮೆಣಸಿನಕಾಯಿ / ದಪ್ಪ ಮೆಣಸಿನಕಾಯಿ
CarrotGajjariಗಜ್ಜರಿ
CauliflowerHoo kosuಹೂ ಕೋಸು
Chow-chowSeemebadneಸೀಮೆಬದನೆ ಕಾಯಿ
Coriander leavesKotthambari Soppuಕೊತ್ತಂಬರಿ ಸೊಪ್ಪು
CucumberSouthe kaayiಸೌತೇಕಾಯಿ
Curry leavesKaribevuಕರಿಬೇವು
Flat BeansAvarekāyiಅವರೆಕಾಯಿ
GarlicBelulliಬೆಳ್ಳುಳ್ಳಿ
Knol-KholGeDDee kosuಗೆಡ್ಡೆ ಕೋಸು/ನವಿಲು ಕೋಸು
GingerShuntiಶುಂಠಿ
Green chilliHasiru menasina kaayiಹಸಿರು ಮೆಣಸಿನಕಾಯಿ
GreensSoppuಸೊಪ್ಪು
Lady's finger / OkraBende kaayiಬೆಂಡೇಕಾಯಿ
LemonNimbe hannuನಿಂಬೆ ಹಣ್ಣು
OnionEerulli, Ullagaddeಈರುಳ್ಳಿ, ಉಳ್ಳಾಗೆಡ್ಡೆ
PeasBataniಬಟಾಣಿ
PotatoAaloo gaddeಆಲೂ ಗಡ್ಡೆ
RadishMoolangi Mulliಮೂಲಂಗಿ
PumpkinKumbal kaayiಕುಂಬಳಕಾಯಿ
Raw plantainBaale kaayiಬಾಳೇಕಾಯಿ
Plantain StemBale Dinduಬಾಳೆ ದಿಂಡು
Ridge Gourd/Chinese OkraHīrekāyiಹೀರೆಕಾಯಿ
Snake gourdPadavala kaayiಪಡವಲಕಾಯಿ
Sweet PotatoGenasuಗೆಣಸು
TomatoTamtekayi, Tometo, Tomyato/Gore hannuಟಮಟೆಕಾಯಿ,ಟೊಮೆಟೊ/ಟೊಮ್ಯಾಟೊ/ಗೊರೆಹಣ್ಣು
CoconutThengina kayiತೆಂಗಿನಕಾಯಿ
BeetrootKanduberuಕಂದು ಬೇರು(ಕೆಂಪು ಮೂಲಂಗಿ)
Cocina/Ivy GourdTondekayiತೊಂಡೆಕಾಯಿ
Elephant Yamsuvarna Geddeಸುವರ್ಣ ಗೆಡ್ದೆ
MushroomNayi Kode/Anabeನಾಯಿ ಕೊಡೆ/ಅಣಬೆ
Mint leavesPudina soppuಪುದಿನ ಸೊಪ್ಪು
Fenugreek leavesMenthya soppuಮೆಂತ್ಯ ಸೊಪ್ಪು
Spinachpalak soppuಪಾಲಕ್ ಸೊಪ್ಪು
cluster beansChavalikai/Gorikaiಚವಳಿಕಾಯಿ
Malabar spinachBasale soppuಬಸಳೆ ಸೊಪ್ಪು
Amaranthrajgiraರಾಜಗಿರಿ ಸೊಪ್ಪು
Bread fruitBeru halasinakayiಬೇರು ಹಲಸಿನಕಾಯಿ
Taro rootkesu geddeಕೆಸುವಿನ ಗೆಡ್ಡೆ
Groundnutsheng/kadle kayiಶೇಂಗಾಕಾಳು/ಕಡ್ಲೆಕಾಯಿ

 

Indian States and Capitals in Kannada



ತೆಲಂಗಾಣ – ಹೈದರಾಬಾದ್
ಅರುಣಾಚಲ ಪ್ರದೇಶ – ಇಟಾನಗರ
ಆಸ್ಸಾಮ್ – ದಿಸ್ಪುರ
ಬಿಹಾರ – ಪಾಟ್ನಾ
ಛತ್ತೀಸ್‌ಘಡ್ – ರಾಯಪುರ
ದೆಹಲಿ – ನವ ದೆಹಲಿ
ಗೋವಾ – ಪಣಜಿ
ಗುಜರಾತ – ಗಾಂಧಿನಗರ
ಹಿಮಾಚಲ ಪ್ರದೇಶ – ಶಿಮ್ಲಾ
ಜಮ್ಮು ಮತ್ತು ಕಾಶ್ಮೀರ – ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು
ಝಾರ್ಖಂಡ – ರಾಂಚಿ
ಕರ್ನಾಟಕ – ಬೆಂಗಳೂರು
ಕೇರಳ – ತಿರುವನಂತಪುರಂ
ಮಧ್ಯ ಪ್ರದೇಶ – ಭೂಪಾಲ್
ಮಹಾರಾಷ್ಟ್ರ – ಮುಂಬಯಿ
ಮಣಿಪುರ – ಇಂಫಾಲ
ಮೇಘಾಲಯ – ಶಿಲ್ಲಾಂಗ
ಮಿಝೋರಾಮ್ – ಐಝ್ವಾಲ್
ನಾಗಾಲ್ಯಾಂಡ್ – ಕೊಹಿಮಾ
ಒಡಿಶಾ – ಭುವನೇಶ್ವರ
ಹರಿಯಾಣ ಮತ್ತು ಪಂಜಾಬ – ಚಂಡೀಗಡ
ರಾಜಸ್ಥಾನ – ಜೈಪುರ
ಸಿಕ್ಕಿಂ – ಗ್ಯಾಂಗಟಕ್
ಸೀಮಾಂಧ್ರ – ಅಮರಾವತಿ
ತಮಿಳುನಾಡು – ಚೆನ್ನೈ
ತ್ರಿಪುರ – ಆಗರ್ತಲ
ಉತ್ತರ ಪ್ರದೇಶ – ಲಕ್ನೊ
ಉತ್ತರಾಂಚಲ – ಡೆಹ್ರಾಡೂನ್
ಪಶ್ಚಿಮ ಬಂಗಾಳ – ಕಲ್ಕತ್ತಾ

 

 ಕರ್ನಾಟಕದ ಒಟ್ಟು ತಾಲೂಕುಗಳು

 ಕರ್ನಾಟಕವು ಒಟ್ಟು 31 ಜಿಲ್ಲೆಗಳನ್ನು ಒಳಗೊಂಡಿದೆ.

ಬೀದರ್

 • ಬಸವಕಲ್ಯಾಣ 

 • ಔರಾದ

 •  ಭಾಲ್ಕಿ

 •  ಬೀದರ್

 •  ಕಮಲನಗರ

 •  ಚಿಟ್ಟಗುಪ್ಪ

 •  ಹುಲಸೂರು

 • ಹುಮನಾಬಾದ


ಕಲಬುರ್ಗಿ  

 •  ಕಲಬುರ್ಗಿ 

 •  ಕಾಳಗಿ

 •  ಅಫ್ಜಲ್ ಪುರ

 •  ಚಿಂಚೋಳಿ

 •   ಆಳಂದ್

 •   ಜೇವರ್ಗಿ

 •   ಚಿತ್ತಾಪುರ

 •   ಸೇಡಂ

 •  ಕಮಲಾಪುರ

 •   ಶಹಬಾದ್

 •   ಯಾಡ್ರಮಿ


ಯಾದಗಿರಿ 

•  ಯಾದಗಿರಿ

•   ಶಹಾಪುರ 

• ಗುರುಮಿಟ್ಕಲ್

•  ಹುಣಸಗಿ

•  ಸುರಪುರ

•  ವಡಗೇರಾ


ವಿಜಯಪುರ

  •  ಬಬಲೇಶ್ವರ 

  •  ಬಸವನಬಾಗೇವಾಡಿ 

  •  ಚಡಚಣ

  •  ದೇವರಹಿಪ್ಪರಗಿ 

  •   ಇಂಡಿ

  •   ಕೊಲ್ಹಾರ

  •  ಮುದ್ದೇಬಿಹಾಳ 

  •  ನಿಡಗುಂದಿ 

  •  ಸಿಂದಗಿ

  •  ತಾಳಿಕೋಟಿ 

  •  ತಿಕೋಟಾ 

  •  ವಿಜಯಪುರ 


ರಾಯಚೂರು 

•  ಲಿಂಗಸೂಗೂರು 

• ರಾಯಚೂರು 

• ದೇವದುರ್ಗ

• ಮಾನ್ವಿ 

•  ಮಸ್ಕಿ

•  ಸಿಂಧನೂರು

•  ಸಿರವಾರ


ಬಾಗಲಕೋಟ 

 •  ಬಾದಾಮಿ 

 •  ಬಾಗಲಕೋಟ 

 •  ಬೀಳಗಿ 

 •  ಗುಳೇದಗುಡ್ಡ 

 •  ಹುನಗುಂದ 

 • ಇಳಕಲ್ 

 •  ಜಮಖಂಡಿ 

 •  ಮುಧೋಳ 

 •  ರಬಕವಿ ಬನಹಟ್ಟಿ 


ಬೆಳಗಾವಿ 

  • ಅಥಣಿ 

  • ಬೈಲಹೊಂಗಲ 

  • ಬೆಳಗಾವಿ 

  •  ಚಿಕ್ಕೋಡಿ 

  •  ಗೋಕಾಕ 

  • ಹುಕ್ಕೇರಿ 

  •  ಕಾಗವಾಡ

  •  ಖಾನಾಪೂರ 

  •  ಕಿತ್ತೂರು 

  •  ಮೂಡಲಗಿ

  •  ನಿಪ್ಪಾಣಿ

  •  ರಾಮದುರ್ಗ 

  •  ರಾಯಬಾಗ

  •  ಸವದತ್ತಿ 


ಕೊಪ್ಪಳ 

  • ಗಂಗಾವತಿ 

  •  ಕನಕಗಿರಿ 

  •  ಕಾರಟಗಿ

  •  ಕೊಪ್ಪಳ 

  •  ಕುಕನೂರು

  •  ಕುಷ್ಟಗಿ 

  •  ಯಲ್ಬುರ್ಗ


ಗದಗ

  •  ಗದಗ

  •  ಗಜೇಂದ್ರಗಡ

  •  ಲಕ್ಷ್ಮೇಶ್ವರ 

  •  ಮುಂಡರಗಿ 

  •  ನರಗುಂದ 

  •  ರೋಣ

  •  ಶಿರಹಟ್ಟಿ 


ಧಾರವಾಡ 

  •  ಅಳ್ನಾವರ

  •  ಅಣ್ಣಿಗೇರಿ 

  •  ಧಾರವಾಡ 

  •  ಹುಬ್ಬಳ್ಳಿ 

  •  ಕಲಘಟಗಿ 

  •  ಕುಂದಗೋಳ 

  •  ನವಲಗುಂದ 


ಉತ್ತರಕನ್ನಡ 

  •  ಅಂಕೋಲಾ 

  •  ಭಟ್ಕಳ 

  •  ದಾಂಡೇಲಿ 

  •  ಹಳಿಯಾಳ 

  •  ಹೊನ್ನಾವರ 

  •  ಕಾರವಾರ 

  •  ಕುಮಟಾ 

  •  ಮುಂಡಗೋಡ

  •  ಸಿದ್ಧಾಪುರ 

  •  ಶಿರಸಿ 

  •  ಜೊಯಿಡಾ ( ಸುಪಾ )

  •  ಯಲ್ಲಾಪುರ 

    

ಬಳ್ಳಾರಿ 

 •  ಬಳ್ಳಾರಿ 

 •  ಕಂಪ್ಲಿ

 •  ಕುರುಗೋಡು

 •  ಸಂಡೂರು 

 •  ಸಿರಗುಪ್ಪಾ


ದಾವಣಗೆರೆ 

  •  ಚನ್ನಗಿರಿ 

  •  ದಾವಣಗೆರೆ 

  •  ಹರಿಹರ

  •  ಹೊನ್ನಾಳಿ

  •  ಜಗಳೂರು

  •  ನ್ಯಾಮತಿ


ಹಾವೇರಿ 

  •  ಬ್ಯಾಡಗಿ

  •  ಹಾನಗಲ್ 

  •  ಹಾವೇರಿ 

  •  ಹಿರೇಕೆರೂರು

  •  ರಾಣೆಬೆನ್ನೂರು

  •  ರಟ್ಟಿಹಳ್ಳಿ

  •  ಸವಣೂರು 

  •  ಶಿಗ್ಗಾಂವ


ಶಿವಮೊಗ್ಗ 

  •  ಭದ್ರಾವತಿ 

  •   ಹೊಸನಗರ 

  •  ಸಾಗರ

  • ಶಿಕಾರಿಪುರ 

  • ಶಿವಮೊಗ್ಗ 

  •  ಸೊರಬ

  •  ತೀರ್ಥಹಳ್ಳಿ 


ಉಡುಪಿ

  ಬ್ರಹ್ಮಾವರ 

  ಬೈಂದೂರು 

  ಹೆಬ್ರಿ

  ಕಾಪು

  ಕಾರ್ಕಳ 

  ಕುಂದಾಪುರ

  ಉಡುಪಿ 


ಚಿತ್ರದುರ್ಗ 

  ಚಳ್ಳಕೆರೆ 

  ಚಿತ್ರದುರ್ಗ 

  ಹಿರಿಯೂರು 

  ಹೊಳಲ್ಕೆರೆ 

  ಹೊಸದುರ್ಗ 

  ಮೊಳಕಾಲ್ಮೂರು 


ಚಿಕ್ಕಮಗಳೂರು 

  ಅಜ್ಜಂಪುರ 

  ಚಿಕ್ಕಮಗಳೂರು 

  ಕಡೂರು 

  ಕೊಪ್ಪ 

  ಮೂಡಿಗೆರೆ 

  ನರಸಿಂಹರಾಜಪುರ 

  ಶೃಂಗೇರಿ 

  ತರಿಕೆರೆ


ದಕ್ಷಿಣಕನ್ನಡ

  ಬಂಟ್ವಾಳ 

  ಬೆಳ್ತಂಗಡಿ 

  ಕಡಬ

  ಮಂಗಳೂರು 

  ಮೂಡುಬಿದಿರೆ

  ಪುತ್ತೂರು 

  ಸುಳ್ಯ 

Join Daily Quiz in Kannada

ತುಮಕೂರು 

  ಚಿಕ್ಕನಾಯಕನಹಳ್ಳಿ 

  ಗುಬ್ಬಿ

  ಕೊರಟಗೆರೆ 

  ಕುಣಿಗಲ್ 

  ಮಧುಗಿರಿ 

  ಪಾವಗಡ 

  ಸಿರಾ 

  ತಿಪಟೂರು 

  ತುಮಕೂರು 

  ತುರುವೇಕೆರೆ 


ಹಾಸನ

  ಆಲೂರು 

  ಅರಕಲಗೂಡು 

  ಅರಸೀಕೆರೆ 

  ಬೇಲೂರು 

  ಚನ್ನರಾಯಪಟ್ಟಣ 

  ಹಾಸನ

  ಹೊಳೆನರಸೀಪುರ 

  ಸಕಲೇಶಪುರ 


ಕೊಡಗು 

  ಮಡಿಕೇರಿ 

  ಸೋಮವಾರಪೇಟೆ 

  ವಿರಾಜಪೇಟೆ 


ಚಿಕ್ಕಬಳ್ಳಾಪುರ 

  ಬಾಗೇಪಲ್ಲಿ

  ಚಿಕ್ಕಬಳ್ಳಾಪುರ 

  ಚಿಂತಾಮಣಿ 

  ಗೌರಿಬಿದನೂರು 

  ಗುಡಿಬಂಡಾ

  ಶಿಡ್ಲಘಟ್ಟ 


ಕೋಲಾರ 

  ಬಂಗಾರಪೇಟೆ

  ಕೆಜಿಎಫ್

  ಕೋಲಾರ

  ಮಾಲೂರು 

  ಮುಳಬಾಗಿಲು 

  ಶ್ರೀನಿವಾಸಪುರ


ಬೆಂಗಳೂರು 

  ಆನೇಕಲ್ 

  ಬೆಂಗಳೂರು ಪೂರ್ವ 

  ಬೆಂಗಳೂರು ಉತ್ತರ

  ಬೆಂಗಳೂರು ದಕ್ಷಿಣ 

  ಯಲಹಂಕ 


ಬೆಂಗಳೂರು ಗ್ರಾಮಾಂತರ 

  ದೇವನಹಳ್ಳಿ 

  ದೊಡ್ಡಬಳ್ಳಾಪುರ 

  ಹೊಸಕೋಟೆ 

  ನೆಲಮಂಗಲ 


ರಾಮನಗರ

  ಚನ್ನಪಟ್ಟಣ 

  ಕನಕಪುರ 

  ಮಾಗಡಿ 

  ರಾಮನಗರ


ಮಂಡ್ಯ

  ಕೃಷ್ಣರಾಜಪೇಟೆ 

  ಮದ್ದೂರು 

  ಮಳವಳ್ಳಿ 

  ಮಂಡ್ಯ 

  ನಾಗಮಂಗಲ

  ಪಾಂಡವಪುರ 

  ಶ್ರೀರಂಗಪಟ್ಟಣ 


ಮೈಸೂರು 

  ಹೆಗ್ಗಡದೇವನಕೋಟೆ 

  ಹುಣಸೂರು 

  ಕೃಷ್ಣರಾಜನಗರ

  ಮೈಸೂರು 

  ನಂಜನಗೂಡು 

  ಪಿರಿಯಾಪಟ್ಟಣ

  ಸರಗೂರು

  ಟಿ.ನರಸೀಪುರ 


ಚಾಮರಾಜನಗರ 

  ಚಾಮರಾಜನಗರ 

  ಗುಂಡ್ಲುಪೇಟೆ 

  ಹನೂರು

  ಕೊಳ್ಳೇಗಾಲ 

  ಯಳಂದೂರು 


ವಿಜಯನಗರ

  ಹೊಸಪೇಟೆ 

  ಹರಪನಹಳ್ಳಿ 

  ಹೂವಿನಹಡಗಲಿ

  ಹಗರಿಬೊಮ್ಮನಳ್ಳಿ

  ಕೂಡ್ಲಿಗಿ 

  ಕೊಟ್ಟೂರು


Computer shortcut keys